Shri Siddharoodha Swamiji Math Trust Committee

Hubballi

www.srisiddharoodhaswamiji.in

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಮಹೀಂದ್ರಾ ಬುಲೇರೋ ವಾಹನ ದೇಣಿಗೆ
Date : 21-07-2026
ಇದೇ ದಿನಾಂಕ:-15.06.2026 ರ ಬೆಳಗ್ಗೆ : 08-30 ಘಂಟೆಗೆ ಸೆರೆಂಟಿಕಾ ವಿಂಡ್ ಪವರ್ ಕಂಪನಿ ವತಿಯಿಂದ ಶ್ರೀಮಠಕ್ಕೆ ಪ್ರತಿ ನಿತ್ಯ ನಡೆಯುವ ಅನ್ನದಾಸೋಹಕ್ಕೆ ಕಾಯಿಪಲ್ಲೆ ಹಾಗೂ ಇತರೆ ಆಹಾರ ಧಾನ್ಯಗಳನ್ನು ತರಲಿಕ್ಕೆ ಮಹಿಂದ್ರಾ ಬುಲೇರೋ ವಾಹನವನ್ನು ದೇಣಿಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಸೆರೆಂಟಿಕಾ ವಿಂಡ್ ಪವರ್ ಕಂಪನಿಯ ಸಿ.ಓ. ಶ್ರೀ ಬಾಲಕೃಷ್ಣ, ಸೂರಜ್, ವೆಂಕಟರಡ್ಡಿ ಇವರುಗಳಿಗೆ ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರ ಮೇಲ್ಮನೆ ಸಭಾದ ಅಧ್ಯಕ್ಷರಾದ ಶ್ರೀ ಡಿ.ಆರ್.ಪಾಟೀಲ, ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಬಾಳು ಟಿ. ಮಗಜಿಕೊಂಡಿ, ವೈಸ್-ಚೇರ್‌ಮನ್ನರಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ, ಗೌರವ ಕಾರ್ಯದರ್ಶಿಗಳಾದ ಶ್ರೀ ವಿನಾಯಕ ಅ. ಘೋಡ್ಕೆ, ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಮಾಜಿ ಚೇರ್‌ಮನ್ನರಾದ ಶ್ರೀ ಡಿ.ಡಿ.ಮಾಳಗಿ ಮತ್ತು ಶ್ರೀಮಠದ ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು